

26th November 2025

ಕುಷ್ಟಗಿ : ಸರ್ವಧರ್ಮಗಳ ಆರಾಧಕರು, ಅಧ್ಯಕ್ಷರು ಶ್ರೀ ಬನ್ನಿ ಮಹಾಂಕಾಳಿ ದೇವಿ ಸೇವಾ ಸಮಿತಿ ಕುಷ್ಟಗಿ, ಅಧ್ಯಕ್ಷರು ಭಗತಸಿಂಗ್ ಸೇವಾ ಸಂಸ್ಥೆ ಕುಷ್ಟಗಿ ಇದರ
ಅಧ್ಯಕ್ಷರಾದ ವಜೀರ್ ಬಿ. ಗೋನಾಳ್ ಅವರ ನೇತೃತ್ವದಲ್ಲಿ ದಿನಾಂಕ 27-11-2025 ಗುರುವಾರದಂದು ಕುಷ್ಟಗಿ ನಗರದಲ್ಲಿ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದ್ದು
ಈ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 42 ಹಿಂದೂ ಹಾಗೂ 1 ಮುಸ್ಲಿಮ್ ಸೇರಿದಂತೆ ಒಟ್ಟು 43 ಜೋಡಿಗಳ ಮದುವೆ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ವಜೀರ್ ಬಿ. ಗೋನಾಳ್ ತಿಳಿಸಿದರು.
ಇದುವರೆಗೂ ಸುಮಾರು ಸಾವಿರಕ್ಕೂ ಹೆಚ್ಚು ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿರುವ ವಜೀರ್ ಬಿ. ಗೋನಾಳ್ ಅವರು ಬಡವರ ಪಾಲಿಗೆ ದೇವರ ಸಮಾನರಾಗಿದ್ದಾರೆ. ಮುಸ್ಲಿಂ ಸಮಾಜದ ವ್ಯಕ್ತಿಯಾಗಿದ್ದರು ಕೂಡ ತಮ್ಮ ಧರ್ಮಕ್ಕೆ ಸೀಮಿತವಾಗಿರದೆ ಎಲ್ಲಾ ಸಮಾಜದವರ ಪಾಲಿಗೆ ಹಾಗೂ ಅವರ ನೋವು ನಲಿವುಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ.
ನಾಳೆ ಮುಂಜಾನೆ ನಗರದ ಸಂತೆ ಬಜಾರದಲ್ಲಿ ಇರುವ ಶ್ರೀ ಬನ್ನಿ ಮಹಾಂಕಾಳಿ ದೇವಿಯ ಮಹಾಭಿಷೇಕದ ಪ್ರಯುಕ್ತ ಸರ್ವ ಧರ್ಮ ಶ್ರೀಗಳ ಸಾನಿಧ್ಯದಲ್ಲಿ ಜರಗುವ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಮುಂಜಾನೆ ಹೋಮ ಹವನ, ಕುಂಭ ಹೊತ್ತ ಮಹಿಳೆಯರಿಂದ ಮೆರವಣಿಗೆ, ನಂತರ 43 ಜೋಡಿಗಳ ವಿವಾಹ ಸಾಮೂಹಿಕ ಕಾರ್ಯಕ್ರಮ ಜರುಗಿಲಿದೆ. ನಂತರ ಸರ್ವರಿಗೂ ಅನ್ನ ಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಕುಷ್ಟಗಿಯ ವಿಷ್ಣು ತೀರ್ಥ ನಗರದ ಬಹಿರಂಗ ವೇದಿಕೆಯ ಕಾರ್ಯಕ್ರಮ ನಡೆಯಲಿದ್ದು ದಿವ್ಯ ಸಾನಿಧ್ಯವನ್ನು ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಕುಷ್ಟಗಿ, ಶ್ರೀ ನೀಲಕಂಠ ತಾತನವರು ಸುಕ್ಷೇತ್ರ ಎಂ ಗುಡದೂರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಬಿಜಕಲ್, ಶ್ರೀ ವೀರ ಸಂಗಮೇಶ್ವರ ಮಹಾಸ್ವಾಮಿಗಳು ಹಿರೇಮಠ ಚಳಗೇರಾ, ಹಜರತ್ ಸೈಯದ್ ಷಾ ಅಬ್ದುಲ್ ಖಾದ್ರಿ ಪೈಜಲ್ ಭಾಷಾ ಇಲಕಲ್ಲ, ಶ್ರೀ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ, ಡಾ. ಮಹದೇವ ಮಹಾಸ್ವಾಮಿಗಳು ಕುಕನೂರು, ಶ್ರೀ ಮರುಳಸಿದ್ಧ ದೇವರು ವಿಜಯ ಚಂದ್ರಶೇಖರ ಮಹಾಸ್ವಾಮಿಗಳ ಮಠ ಮುದೇನೂರು, ಶ್ರೀ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ನಿಡಸೆಸಿ, ಶ್ರೀ ಪರಮಪೂಜ್ಯ ಚಂದ್ರಶೇಖರ ದೇವರು ದೋಟಿಹಾಳ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ದೊಡ್ಡನಗೌಡ ಎಚ್ ಪಾಟೀಲ್ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕ್ಷೇತ್ರದ ಶಾಸಕರು ಮಾಡಲಿದ್ದು, ಅಧ್ಯಕ್ಷತೆಯನ್ನು ಅಮರೇಗೌಡ ಪಾಟೀಲ್ ಬಯ್ಯಾಪುರ,ರಾಜ್ಯ ಉಪಾಧ್ಯಕ್ಷರು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಮಾಜಿ ಶಾಸಕರು ವಹಿಸಲಿದ್ದಾರೆ.
ಕಮಲಪ್ಪ ಜಾಲಿಹಾಳ್ ಗ್ರಾನೈಟ್ ಉದ್ಯಮಿಗಳು ಹುಲಗೇರಾ ಹಾಗೂ ಪ್ರಭಾಕರ್ ಹೆಚ್ ಚಿಣಿ, ನಿವೃತ್ತ ಪ್ರಧಾನ ಇಂಜಿನಿಯರ್ ವಿಶೇಷ ಆಹ್ವಾನಿತರಾಗಿ
ಭಾಗವಹಿಸಲಿದ್ದಾರೆ. ಗೌರವ ಆಹ್ವಾನಿತರಾಗಿ ಕಾಡಾ ಅಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಹಸನ್ ಸಾಬ್ ದೋಟಿಹಾಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 6:30ಕ್ಕೆ ಬೃಹತ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಲನ ಚಿತ್ರರಂಗದ ನಟರದ ನಿನಾಸಂ ಸತೀಶ್ ಹಾಗೂ ಸಪ್ತಮಿಗೌಡ ಸೇರಿದಂತೆ ಇತರೇ ನಟ ನಟಿಯರು ಹಾಗೂ ಹಿನ್ನೆಲೆ ಗಾಯಕ ಗಾಯಕಿಯರು ಹಾಗೂ ಜಿ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಜ್ಯೂರಿ ಮೆಂಬರ್ ಶ್ರೀಮತಿ ಶಶಿಕಲಾ ಸುನಿಲ್, ಅಜಯ್ ವಾರಿಯರ್, ಪೃಥ್ವಿ ಭಟ್ಟ, ಶ್ರೀಹರ್ಷ, ಕುಮಾರಿ ಶಿವಾನಿ ಹಾಗೂ ಉದಯ ಟಿವಿ ಕಾಮೆಡಿ ಬೆಳ್ಳಿತೆರೆ ಮತ್ತು ಕಿರುತೆರೆ ನಟಿ ರಾಜೇಶ್ವರಿ , ಹಾಗೂ ಕಾಮಿಡಿ ಕಿಲಾಡಿಗಳು ತಂಡದ ತುಕಾಲಿ ಸಂತೋಷ್, ಮಾನಸ ಸಂತೋಷ್, ಸೂರಜ್ ಹಾಗೂ ಬೆಂಗಳೂರಿನ ವಿವಿಧ ತಂಡದ ಕಲಾವಿದರಿಂದ
ಭಾವೈಕ್ಯ ಸಂಗೀತ ಮಹಾಹಬ್ಬ ಕಾರ್ಯಕ್ರಮ ಜರುಗಲಿದೆ.
ಡಾ. ಶಿವಕುಮಾರ ಸ್ವಾಮೀಜಿ ದಾಸೋಹ ಹಾಗೂ ಕಲಾ ಪೋಷಕ ಮಠ, ಸಿದ್ದನಕೊಳ್ಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಸರ್ವ ಸಮಾಜದವರು ಭಾಗವಹಿಸಬೇಕೆಂದು ಕಾರ್ಯಕ್ರಮದ ಆಯೋಜಕರಾದ ವಜೀರ್ ಬಿ. ಗೋನಾಳ್ ಅಧ್ಯಕ್ಷರು
ಶ್ರೀ ಭಗತಸಿಂಗ್ ಸಂಸ್ಥೆ ಹಾಗೂ ಶ್ರೀ ಬನ್ನಿ ಮಹಾಂಕಾಳಿ ಸೇವಾ ಸಮಿತಿ ಹಾಗೂ ಶಂಕರನಾಗ್ ಆಟೋ ಚಾಲಕರ ಸಂಘ ಕುಷ್ಟಗಿ ಇವರು ತಿಳಿಸಿದ್ದಾರೆ.....
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಸರ್ವಧರ್ಮಗಳ ಆರಾಧಕರು, ಅಧ್ಯಕ್ಷರು ಶ್ರೀ ಬನ್ನಿ ಮಹಾಂಕಾಳಿ ದೇವಿ ಸೇವಾ ಸಮಿತಿ ಕುಷ್ಟಗಿ, ಅಧ್ಯಕ್ಷರು ಭಗತಸಿಂಗ್ ಸೇವಾ ಸಂಸ್ಥೆ ಕುಷ್ಟಗಿ ಇದರ
ಅಧ್ಯಕ್ಷರಾದ ವಜೀರ್ ಬಿ. ಗೋನಾಳ್ ಅವರ ನೇತೃತ್ವದಲ್ಲಿ ದಿನಾಂಕ 27-11-2025 ಗುರುವಾರದಂದು ಕುಷ್ಟಗಿ ನಗರದಲ್ಲಿ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದ್ದು
ಈ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 42 ಹಿಂದೂ ಹಾಗೂ 1 ಮುಸ್ಲಿಮ್ ಸೇರಿದಂತೆ ಒಟ್ಟು 43 ಜೋಡಿಗಳ ಮದುವೆ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ವಜೀರ್ ಬಿ. ಗೋನಾಳ್ ತಿಳಿಸಿದ್ದಾರೆ.

ನೀರು ಬಳಕೆದಾರರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿಲಿ:ಮಧು ಜಿ.ಮಾದೇಗೌಡ

ಶ್ರೀಮತಿ ರಶ್ಮಿ ಪ್ರಶಾಂತ ಕುಲಕರ್ಣಿ ಇವರಿಂದ ಕನ್ನಡ ರಾಜ್ಯೋತ್ಸವ ಕುರಿತು ಕವನ ರಚನೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರ ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆ.